ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಸೋಲಿಸಲು ಕೋಲಾರ ಕ್ಷೇತ್ರದಲ್ಲಿ ಕರಪತ್ರ ಹಂಚಿಕೆ ಕಾರ್ಯ ನಡೆದಿದೆ.
‘ದಲಿತರ ಜಾಗೃತಿ ಅಭಿಯಾನ’ದಡಿ ಕರಪತ್ರ ಹಂಚಿಕೆ ಮಾಡಲಾಗಿದೆ. ಕೋಲಾರ ಕ್ಷೇತ್ರದ ತುಂಬಾ ಕರಪತ್ರ ಅಂಟಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಅಹಿಂದ ಮತಗಳಿಗೆ ಪೆಟ್ಟು ನೀಡಲು ಮಾಡಿರುವ ಕುತಂತ್ರ ಎನ್ನಲಾಗಿದೆ. ಈ ಕರಪತ್ರ ಹಂಚಿಕೆಯ ಹಿಂದೆ ಸ್ವ ಪಕ್ಷದವರ ಕೈವಾಡವಿದೆ ಎಂದು ಶಂಕಿಸಲಾಗಿದೆ.
ದಲಿತ ನಾಯಕರನ್ನು ಸೋಲಿಸಿದ ಸಿದ್ದರಾಮಯ್ಯ ಅವರನ್ನ ಸೋಲಿಸಿ ಎಂಬ ಕರಪತ್ರಗಳನ್ನು ಹಂಚಿಕೆ ಮಾಡುವ ಮೂಲಕ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಿ ದಲಿತ ಸಿಎಂ ಹಾದಿ ಸುಗಮಗೊಳಿಸಿ ಎಂದು ಕರಪತ್ರ ಹಂಚಿಕೆ ಮಾಡಲಾಗುತ್ತಿದೆ.
ಕರಪತ್ರದಲ್ಲಿ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಕೇವಲ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಬಿಂಬಿಸಲಾಗಿದೆ.