ಹಾವೇರಿ: 87 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಣಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು ಮುಂದಿನ ಸಮ್ಮೇಳನಕ್ಕೆ ಆತಿಥ್ಯ ವಹಿಸಲು ಆಸಕ್ತಿ ತೋರಿದ್ದರು. ಈ ಕುರಿತು ಮತ ಚಲಾವಣೆ ನಡೆಸಿದಿದೆ. 46 ಮತದಾರರಲ್ಲಿ ಮಂಡ್ಯ ಪರ 17, ಬಳ್ಳಾರಿ ಪರ 16 ಮತಗಳು ಬಿದ್ದಿವೆ.
ಮಂಡ್ಯಕ್ಕೆ ಹೆಚ್ಚು ಮತ ಬಿದ್ದಿರುವ ಕಾರಣ ಮುಂದಿನ ಸಮ್ಮೇಳನ ಅಲ್ಲೇ ನಡೆಸಲು ತೀರ್ಮಾನ ಮಾಡಿರುವುದಾಗಿ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ತಿಳಿಸಿದರು.